ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಯಾರಿಗಾದರೂ ನೆನಪಿದೆಯೆ?
ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯಲ್ಲಲ್ಲ, ಮನಸ್ಸಿನಲ್ಲಿ ಇರುತ್ತದೆ. ವ್ಯವಸ್ಥೆ ಮನಸ್ಸಿನ ಕನ್ನಡಿ ಮಾತ್ರ. ಮನುಷ್ಯನಿಗೆ ಅಧಿಕಾರ ಸಿಗುವುದು ಅರ್ಹತೆ, ಯೋಗ್ಯತೆ ಮತ್ತು ಅವಕಾಶವಿದ್ದಾಗ. ಕೆಲವೊಮ್ಮೆ ಯಾವುದೂ ಇಲ್ಲದಿದ್ದಾಗಲೂ ಅವಕಾಶ ಸೃಷ್ಟಿಸಿಕೊಳ್ಳಲಾಗುತ್ತದೆ ಭ್ರಷ್ಟಾಚಾರದ ಮೂಲಕ. ಅದು ವ್ಯವಸ್ಥೆಯ ಜೊತೆಗೆ ವ್ಯವಸ್ಥೆಯಲ್ಲಿನ ಆತ್ಮಸಾಕ್ಷಿಯನ್ನೂ ಕೊಲ್ಲುತ್ತದೆ. ಅಸಮಾನತೆ, ಅರಾಜಕತೆ ಮತ್ತು ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತದೆ. ಯಾವುದೇ ಬಗೆಯ ಅಧಿಕಾರ ಮನುಷ್ಯನ ಅಸಲಿ ಮುಖವನ್ನು ತೋರಿಸುತ್ತದೆ. ಅಂತಹ ಅಸಲಿ ಮುಖಗಳಲ್ಲೊಂದು ಭ್ರಷ್ಟಾಚಾರ. ಭ್ರಷ್ಟಾಚಾರದಲ್ಲಿ ಹಲವು ಬಗೆ. ಮೋಸ, ಸುಳ್ಳು, ವಂಚನೆ, ಹೆದರಿಸುವಿಕೆ, ಬೇಡಿಕೆ ಇಡುವಿಕೆ, ಪ್ರಲೋಭನೆ, ಒತ್ತಡ ತರುವುದು ಇತ್ಯಾದಿ ರೂಪದಲ್ಲಿ ಅದು ಕಾಣಿಸುತ್ತದೆ. ಯಾವುದೇ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಂಪರ್ಕ ಅಥವಾ ಸಂಪನ್ಮೂಲದ ಬಲದಿಂದ ತನಗೆ ಬೇಕಾದುದನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಾದರೆ ಆ ವ್ಯವಸ್ಥೆಯಲ್ಲಿ ಸಮಾನತೆ ಇಲ್ಲವೆಂತಲೇ ಅರ್ಥ. ಇಂತಹ ಅಸಮಾನತೆ ಸೃಷ್ಟಿಸುವ ಯಾವುದೇ ವ್ಯವಸ್ಥೆ ನ್ಯಾಯಯುತ ಬದುಕಿಗೆ ಅಪಾಯವೆ. ಎಲ್ಲಿ ನ್ಯಾಯಯುತ ಬದುಕು ಸಾಧ್ಯವಿಲ್ಲವೊ ಅಲ್ಲಿ ಜನತಂತ್ರ ಸಹ ಸಂಕಷ್ಟದಲ್ಲಿರುತ್ತದೆ. ಈ ಸಂಕಷ್ಟಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಚಾಣಕ್ಯನಂತಹ ರಾಜನೀತಿಜ್ಞನೂ ಸಹ ಹೆಣಗಾಡಿದ್ದಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ಪ್ರಸ್ತುತ ಆಧುನಿಕ ರಾಜಕಾರಣದಿಂದ ಶೈಕ್ಷ